ಶ್ರೀ ಪ್ರಣಬ್ ಮುಖರ್ಜಿ ನಿಧನಕ್ಕೆ ಸಂತಾಪ

ಭಾರತದ ಮಾಜಿ ರಾಷ್ತ್ರಪತಿ ಶ್ರೀ ಪ್ರಣಬ್ ಮುಖರ್ಜಿ ನಿಧಾನಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೋ ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ.

ಪ್ರಣಬ್ ಮುಖರ್ಜಿ ಭಾರತದ ಒಬ್ಬ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದರು. ಅವರು ರಾಷ್ಟ್ರಪತಿಗಳಾಗಿ ಚುನಾಯಿತರಾಗುವ  ಮೊದಲು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ  ಕೊಡುಗೆಗಳನ್ನು ನೀಡಿದರು,  ಒಬ್ಬ ಚುನಾಯಿತ ಸಂಸದ್ ಸದಸ್ಯನಾಗಿ, ಕೇಂದ್ರದಲ್ಲಿನ ಹಲವು ಸರಕಾರಗಳಲ್ಲಿ ಹಿರಿಯ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಅವರು  ಎಲ್ಲ  ರಾಜಕೀಯ ಪಕ್ಷಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು, ಹಲವು ಬಾರಿ ತಾವು ಪ್ರತಿನಿಧಿಸುವ ಸರ್ಕಾರಗಳ   ಪರವಾಗಿ  ಪ್ರಮುಖ ಮಧ್ಯಸ್ಥಿಕೆದಾರನ  ಪಾತ್ರವನ್ನು ವಹಿಸಿದರು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೋ ಅವರ ಪುತ್ರ ಅಭಿಜಿತ್ , ಪುತ್ರಿ ಶರ್ಮಿಷ್ಠಾ ಮತ್ತು ಕುಟುಂಬದ ಇತರ ಸದಸ್ಯರಿಗೆ ಪಕ್ಷದ  ಆಳವಾದ ಸಂತಾಪಗಳನ್ನು  ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *